ವ್ಯತಿರಿಕ್ತ ವರ್ಣಗಾಥೆ

ಆಗಸದ ತುಂಬೆಲ್ಲ ಚೆಲ್ಲಿ ಬಿದ್ದ
ಅನ್ನದ ಅಗುಳು
ಕಲಾವಿದ ಕೊಂಚ ಕೊಂಚ
ಬಲಗೈಯೂರಿ ಒತ್ತತೊಡಗಿದ ಕುಂಚ.
ನಡುವೆ ಬೆಳದಿಂಗಳ ಚಂದಿರನ ಹೊತ್ತು ತರಬೇಕು
ಎನ್ನುತ್ತ ಕವಿತೆ ಬರೆಯತೊಡಗಿದ.

ಅದು ಬರಿಯ ಒಂದು ನೋಟವಲ್ಲ
ಒಂದು ಆಟ, ಒಂದು ಅಧ್ಯಾಯ
ಮತ್ತೆ ಪುಟ ತಿರುವಿ ಬಳಿಯಬೇಕು
ವರ್ಣಗಾಥೆ – ಬಣ್ಣ ಬಣ್ಣಗಳಲ್ಲಿ

ಕೈಯ ಹಿಂಡತೊಡಗಿತು ಕುಂಚ
ಆಕುಂಚಿಸಿ ಸೆಟೆದುಕೊಳ್ಳುತ್ತ.
ಚುಕ್ಕಿಗಳ ಜೊತೆಗೇಕೆ ಚಂದಿರ?
ಉತ್ತರವಿಲ್ಲ ಕಲಾವಿದನಲ್ಲಿ.

ಬರೆದ ಚಿತ್ರದ ಅಡಿಗೆ ಕೊಂಚಕೊಂಚವೇ ಅದೆಷ್ಟೋ
ಕುಂಚಗಳ ಸೃಷ್ಟಿಯಾಗತೊಡಗಿತು.
ಈಗ ಹತ್ತಾರು ನೂರಾರು ಕುಂಚಗಳು
ಎದ್ದು ಬರತೊಡಗಿದವು. ಚಿತ್ರಪಟದಿಂದ
ಗಾಬರಿಗೊಂಡ ವಿಹ್ವಲಿತನಾದ ಕಲಾವಿದ
ಮುಖತಿರುವಿ ಮರೆಯಾಗಬಯಸಿದ.

ಸೂಜಿ ಇರಿತಕ್ಕಿಂತ ಆಳವಾಗಿ ಕುಂಚ
ಕುಕ್ಕತೊಡಗಿತು. ಇಂಚು ಇಂಚಿಗೂ ಬಿಡದೆ
ತೊಟ್ಟಿಕ್ಕುವ ರಕ್ತದೊಂದಿಗೆ ಕಲಾವಿದ
ಹಿಂಗಾಲಲ್ಲಿ ನಡೆಯತೊಡಗಿದ.
ಕಾಲಲ್ಲಿ ಎನೋ ಸಿಕ್ಕಂತಾಗಿ ಎಡವಿಬಿದ್ದ
ಅಂಗಾತಾಗಿ, ಚಿತ್ರಪಟದ ಚಾರಕಲ ಚುಕ್ಕಿಗಳ
ಮಧ್ಯೆ ಈಗ ರಕ್ತಸಿಕ್ತ ಗುಳಿಬಿದ್ದ ಮುಖದ
ಅವನಿದ್ದಾನೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇನ್ನೊಂದು ಮುಖಾಮುಖಿ
Next post ಗಣಪತಿ

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

cheap jordans|wholesale air max|wholesale jordans|wholesale jewelry|wholesale jerseys